(Track 04) Lyrics & Tabs by The Mendoza Line

(Track 04)

guitar chords lyrics

The Mendoza Line

Album : Sent Down To AA alt-country PlayStop

ಎಷ್ಟು ಸಾಹಸವಂತ ನೀನೆ ಬಲವಂತ । ಇಷ್ಟದಾಯಕ ಭಳಿ ಭಳಿರೇ ಹನುಮಂತ॥
ಅಟ್ಟುತ ಖಳರನು ಮೆಟ್ಟಿ ಸೀಳುತಲಿ । ಕುಟ್ಟಿ ಚಂಡಾಡಿದ ಧಿಟ್ಟ ನೀನಹುದೋ ॥ ಪ ॥
ರಾಮರಪ್ಪಣೆಯಿಂದ ಶರಧಿಯ ದಾಟಿ । ಆ ಮಹಾ ಅಸುರೆಯ ಸೀಳಿ ಬಿಸಾಟಿ ।

ಸ್ವಾಮಿ ಕಾರ್ಯವನುಕೂಲದಿ ಯೋಚಿಸಿ । ಪ್ರೇಮದಿ ನಡೆದನು ಆರೆಲೆ ಸಾಟಿ ॥ ೧ ॥
ದೂರದಿಂದಸುರನ ಪುರವನ್ನೇ ನೋಡಿ । ಮನದಿ ಶ್ರೀರಾಮರ ಸ್ಮರಣೆಯಾ ಮಾಡಿ ।
ಹಾರುತ ಹರುಷದಿ ವರಸಿಲಂಕಿಣಿಯನು । ವಾರಿಜ ಮುಖಿಯಳ ಕಂಡು ಮಾತಾಡಿ ॥ ೨ ॥
ರಾಮರ ಕ್ಷೇಮವ ರಮಣಿಗೆ ಪೇಳಿ । ತಾಮಸ ಮಾಡದೆ ಮುದ್ರಿಕೆಯ ನೀಡಿ ।
ಭೂಮಿಜೆ ಜಾನಕಿ ಕುರುಡು ನೀಡಲಾಗ । ಆ ಮಹಾವನದೊಳು ಫಲಗಳ ಬೇಡಿ ॥ ೩ ॥
ಕಣ್ಣಿಗೆ ಬೇಕಾದ ಹಣ್ಣು ಸವಿದು । ಹಣ್ಣಿನ ನೆವದಲಿ ಅಸುರರ ಬಡಿದು ।
ಟಣ್ಣನೆ ಟಣ್ಣನೆ ಹಾರಿ ನೆಗೆದಾಡುತ । ಬಣ್ಣಿಸಿ ಅಸುರರ ಬಲವನು ಮುರಿದು ॥ ೪ ॥
ಶೃಂಗಾರ ವನದಲ್ಲಿದ್ದ ರಾಕ್ಷಸರ ಅಂಗವನಳಿಸಿದ್ಯೋ ಅತಿಶಯ ಶೂರಾ ।
ನುಂಗಿ ಅಸ್ತ್ರವನು ಅಕ್ಷಯ ಕುವರನ । ಭಂಗಿಸಿ ಬಿಸುಟಿದ್ಯೋ ಬಂದ ರಕ್ಕಸರಾ ॥ ೫ ॥
ದೂರ ಪೇಳುವರೆಲ್ಲ ರಾವಣನೊಡನೆ । ಚೀರುತ ಕರೆಸಿದ ಇಂದ್ರಜಿತುವನ್ನೇ ।
ಚೋರ ಕಪಿಯನು ಹಿಡಿದುತಾ ಎನ್ನುತ । ಶೂರರ ಕಳಿಸಿದ ನಿಜಸುತರೊಡನೆ ॥ ೬ ॥
ಪಿಡಿದನು ಇಂದ್ರಜಿತು ಕಡುಕೋಪದಿಂದ । ಹೆಡೆಮುರಿಗೆ ಕಟ್ಟಿದ ಬ್ರಹ್ಮಾಸ್ತ್ರದಿಂದ ॥

ದೂರ ಪೇಳುವರೆಲ್ಲ ರಾವಣನೊಡನೆ । ಚೀರುತ ಕರೆಸಿದ ಇಂದ್ರಜಿತುವನ್ನೇ ।
ಚೋರ ಕಪಿಯನು ಹಿಡಿದುತಾ ಎನ್ನುತ । ಶೂರರ ಕಳಿಸಿದ ನಿಜಸುತರೊಡನೆ ॥ ೬ ॥
ಪಿಡಿದನು ಇಂದ್ರಜಿತು ಕಡುಕೋಪದಿಂದ । ಹೆಡೆಮುರಿಗೆ ಕಟ್ಟಿದ ಬ್ರಹ್ಮಾಸ್ತ್ರದಿಂದ ॥
ಗುಡುಗುಡು ಗುಟ್ಟುತ ಕಿಡಿಕಿಡಿಯಾಗುತ । ನಡೆದನು ಲಂಕೆಯ ಒಡೆಯನಿದ್ದಲ್ಲಿಗೆ ॥ ೭ ॥
ಕಂಡ ರಾವಣನು ಉದ್ದಂಡ ಕಪಿಯನ್ನೆ । ಮಂಡೆಯ ತೂಗುತ ಮಾತನಾಡಿಸಿದ ।
ಭಂಡು ಮಾಡದೆ ಬಿಡೆ ನೋಡು ಕಪಿಯನೆ । ಕಂಡು ದುರದುರನೆ ನಡೆದನಾಗ ॥ ೮ ॥
ಛಲವ್ಯಾಕೋ ನಿನಗಿಷ್ಟು ಎಲವೋಕೋಡಗನೆ । ನೆಲೆ ಯಾವುದ್ಹೇಳೋ ನಿನ್ನೊಡೆಯನ ಹೆಸರನ್ನ ।
ಬಲವಂತ ರಾಮರ ಬಂಟ ಬಂದಿಹೆನೋ । ಹಲವು ಮಾತ್ಯಾಕೋ ಹನುಮನೆ ನಾನು ॥ ೯ ॥
ಬಡ ರಾವಣನೆ ನಿನ್ನ ಬಡಿದು ಹಾಕುವೆನು । ಎನ್ನೊಡೆಯನಪ್ಪಣೆಯಿಲ್ಲೆಂದು ತಾಳಿದೆನು ।
ಪುಡಿಮಾಡುವೆ ಫುಲ್ಲ ರಕ್ಕಸನೆ । ತೊಡೆವೆನು ನಿನ್ನಪಣೆಯ ಅಕ್ಷರವ ॥ ೧೦ ॥
ನಿನ್ನಂತ ದೂತರು ರಾಮರ ಬಳಿಗೆ । ಇನ್ನೆಷ್ಟು ಮಂದಿಗಳುಂಟು ಹೇಳೋ ನೀತ್ವರಿಯಾ ।
ನನ್ನಂತ ದೂತರು ನಿನ್ನಂತ ಪ್ರೇತರು । ಇನ್ನೂರು ಕೋಟಿ ಕೇಳರಿಯಾ ॥ ೧೧ ॥
ಕಡುಕೋಪದಿಂದಲಿ ಖೂಳ ರಾವಣನು । ಸುಡಿಸುಡಿ ಬಾಲವ ಸುತ್ತಿವಸನನು ।
ಒಡೆಯನ ಮಾತಿಗೆ ತಡೆಬಡೆಯಿಲ್ಲದೆ । ಒಡನೆ ಮುತ್ತಿದರು ಗಡಿಮನೆಯವರು ॥ ೧೨ ॥
ತಂದಿರುವಸನವ ತಂಡ ತಂಡದಲಿ । ಒಂದೊಂದು ಮೂಟೆ ಎಂಭತ್ತು ಕೋಟಿಯಲಿ ।
ಚಂದದಿ ಹರಳಿನ ತೈಲದೊಳದ್ದಿಸಿ । ನಿಂದ ಹನುಮನು ಬಾಲವ ಬೆಳೆಸುತ ॥ ೧೩ ॥
ಶಾಲುಶಕಲಾತಿಯು ಸಾಲದೆಯಿರಲು । ಬಾಲೆರ ವಸ್ತ್ರವ ಸೆಳೆದು ತಾರೆನಲು ।
ಬಾಲವ ನಿಲ್ಲೆಸಿ ಬೆಂಕಿಯನಿಡುತಲಿ । ಕಾಲ ಮೃತ್ಯುವ ಕೆಣಕಿದರಲ್ಲಿ ॥ ೧೪ ॥
ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ । ಇಣುಕಿ ನೋಡುತ ಅಸುರರಣಕಿಸುತ ।
ಝಣಝಣ ಝಣರೆನೆ ಬಾಲದ ಗಂಟೆಯು । ಮನದಿ ಶ್ರೀರಾಮರ ಪಾದವ ನೆನೆಯುತ ॥ ೧೫ ॥
ಮಂಗಳಂ ಶ್ರೀರಾಮಚಂದ್ರ ಮೂರುತಿಗೆ । ಮಂಗಳಂ ಸೀತಾದೇವಿ ಚರಣಂಗಳಿಗೆ ।
ಮಂಗಳವೆನುತ ಲಂಕೆಯ ಸುಟ್ಟು । ಲಂಘಿಸಿ ಅಸುರನ ಗಡ್ದಕೆ ಹಿಡಿದ ॥ ೧೬ ॥
ಹತ್ತಿತು ಅಸುರನ ಗಡ್ಡಮೀಸೆಗಳು । ಸುತ್ತಿತು ಹೊಗೆ ಬ್ರಹ್ಮಾಂಡ ಕೋಟಿಯೊಳು ।
ಚಿತ್ತದಿರಾಮರು ಕೋಪಿಸುವರು ಎಂದು । ಚಿತ್ತದಿ ನಡೆದನು ಅಸುರನಿದ್ದೆಡೆಗೆ ॥ ೧೭ ॥
ಸೀತೆಯ ಕ್ಷೇಮವ ಶ್ರೀರಾಮರಿಗೆ ಹೇಳಿ । ಪ್ರೀತಿಯಿಂ ಕೊಟ್ಟ ಕುರುಹ ಕರದಲ್ಲಿ ।
ಸೇತುವೆ ಕಟ್ಟಿ ಚದುರಂಗ ಬಲಸಹ । ಮುತ್ತಿತು ಲಂಕೆಯ ಸೂರೆಗೈಯುತಲಿ ॥ ೧೮ ॥
ವೆಗ್ಗಳವಾಯಿತು ರಾಮರ ದಂಡು । ಮುತ್ತಿತು ಲಂಕೆಯ ಕೋಟೆಯ ಕಂಡು ।
ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ । ಝಗ್ಗನೆ ಪೇಳ್ದರು ರಾವಣಗಂದು ॥ ೧೯ ॥
ರಾವಣ ಮೊದಲಾದ ರಾಕ್ಷಸರ ಕೊಂದು । ಭಾವಶುದ್ಧದಲಿ ವಿಭೀಷಣಬಾಳೆಂದು ।
ದೇವಿ ಸೀತೆಯ ನೋಡಗೊಂಡಯೋಧ್ಯದಿ । ದೇವ ಶ್ರೀರಾಮ ರಾಜ್ಯವಾಳಿದರು ॥ ೨೦ ॥
ಶಂಖದೈತ್ಯನ ಕೊಂದೆ ಶರಣು ಶರಣಯ್ಯ । ಶಂಖಾಗಿರಿಯಲಿ ನಿಂದ ಹನುಮಂತರಾಯ ।
ಪಂಕಜಾಕ್ಷ ಹಯವದನ ಕಟಾಕ್ಷದಿ । ಬಿಂಕದಿ ಪಡೆದೆಯೋ ಅಜಪದವಿಯನು ॥ ೨೧ ॥

Like us on Facebook.....
-> Loading Time :0.0090 sec